ಬೆಂಗಳೂರು : ಹೆರಿಗೆ ಮಾಡಿಸಲು ಲಂಚಕ್ಕೆ ಬೇಡಿಕೆ ಇಟ್ಡಿದ್ದ ನರ್ಸ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಂಗಾಲಕ್ಷ್ಮಿ ಲೊಇಕಾಯುಕ್ತ ಬಲೆಗೆ ಬಿದ್ದ ನರ್ಸ್ ಆಗಿದ್ದು, ಹೆರಿಗೆ ಮಾಡಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂದರ್ಭದಲ್ಲಿ ನರ್ಸ್ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಾಗಲಗುಂಟೆ ನಿವಾಸಿ ಕಮಲಮ್ಮ ತಮ್ಮ ಪುತ್ರಿಯನ್ನು ಹೆರಿಗೆಗೆ ಕರೆದುಕೊಂಡು ಬಂದಿದ್ದು, 6500 ರೂ. ಕೊಡುವಂತೆ ನರ್ಸ್ ಗಂಗಾಲಕ್ಷ್ಮಿ ಬೇಡಿಕೆ ಇಟ್ಟಿದ್ದಾರೆ.
ಕೊನೆಗೆ 5,500 ರೂ. ಕೊಡಲು ಮಾತುಕತೆಯಾಗಿದ್ದು, ಹೆರಿಗೆಯಾದ ನಂತರ 5ಸಾವಿರ ರೂಪಾಯಿಗಳನ್ನು ಪೋನ್ ಪೇ ಮಾಡಿಸಿಕೊಂಡಿದ್ದಾರೆ. ಉಳಿದ 500 ರೂಪಾಯಿ ನಗದು ಕೊಡುವಂತೆ ತಿಳಿಸಿದ್ದಾರೆ.
ಎಸ್ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಗಂಗಾಲಕ್ಷ್ಮಿಯವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.