
ದಾವಣಗೆರೆ : ದಾವಣಗೆರೆಗೆ ಉಮಾಪ್ರಶಾಂತ್ ಮೂರನೇ ಮಹಿಳಾ ಎಸ್ಪಿಯಾಗಿದ್ದು, ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಎಸಿಬಿ ನಿವೃತ್ತ ಎಸ್ಪಿ ಜಿಎ ಜಗದೀಶ್ ದಾವಣಗೆರೆ ವಿಜಯೊಂದಿಗೆ ಹಂಚಿಕೊಂಡಿದ್ದಾರೆ.
ದಾವಣಗೆರೆಗೆ ಮೊದಲು 2003-2004 ರಲ್ಲಿ ಮಾಲಿನಿ ಕೃಷ್ಣಮೂರ್ತಿ, ನಂತರ 2006 ಮತ್ತು 2008 ರಲ್ಲಿ ಸೋನಿಯಾ ನಾರಂಗ್ ನಂತರ ಉಮಾ ಪ್ರಶಾಂತ್ ಬಂದಿದ್ದಾರೆ. ಹಾಲಿ ಎಸ್ಪಿ ಉಮಾಪ್ರಶಾಂತ್ ಒಬ್ಬ ಧೈರ್ಯವಂತ ಹೆಣ್ಣು ಮಗಳು, ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ಸಾಕಷ್ಟು ಕ್ರಮ ಕೈಗೊಂಡಿದ್ದಾರೆ.
ಮೂಲತಃ ಮೈಸೂರು ಜಿಲ್ಲೆ ಕೆಆರ್ ನಗರದವರಾಗಿದ್ದಾರೆ. ಎಂಎ ಅರ್ಥಶಾಸ್ತ್ರ ಓದಿದೆ ಉಮಾಪ್ರಶಾಂತ್ ಗೋಲ್ಡ್ ಮೆಡಲ್ ಪಡೆದಿದ್ದಾರೆ. 2010 ನೇ ಬ್ಯಾಚ್ ನ ಕೆಎಸ್ ಪಿಎಸ್ ಅಧಿಕಾರಿಯಾಗಿರುತ್ತಾರೆ. ಮೂಲ ಮತ್ತು ಪ್ರಾಯೋಗಿಕ ತರಬೇತಿ ನಂತರ ಕುಣಿಗಲ್ ಉಪವಿಭಾಗದ ಕಾರವಾರ ಕರ್ನಾಟಕ ಲೋಕಾಯುಕ್ತ ವಿಭಾಗದಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಡಿಸಿಪಿ, ಎಸಿಬಿ ಎಸ್ಪಿಯಾಗಿಯೂ ಆಡಳಿತ ನೀಡಿದ ಅನುಭವವಿದೆ. ಕಳೆದ ಆರು ತಿಂಗಳಿನಿಂದ ದಾವಣಗೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾನೂನು, ಶಾಂತಿ, ಸುವ್ಯವಸ್ಥೆ, ಅಪರಾಧ ತಡೆ, ಪತ್ತೆ ಕಾರ್ಯದಲ್ಲಿ ಯಶಸ್ವಿ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಲ್ಯಾಣ ಹೆಚ್ಚು ಒತ್ತು ನೀಡಿದ್ದಾರೆ. ಅಲ್ಲದೇ ಅವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಮಾಡಿದ್ದಾರೆ ಜೊತೆಗೆ ಮಾನವೀಯತೆ ಮೌಲ್ಯ ಬೆಳೆಸಿಕೊಂಡು ವೃತ್ತಿಪರ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅಕ್ರಮ ಚಟುವಟಿಕೆ ಸಾಮಾಜಿಕ ಪಿಡುಗುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ಪೊಲೀಸ್ ಹಾಗೂ ಸಾರ್ವಜನಿಕ ಸಂಬಂಧ ಸಮಸ್ಯೆ ಬಗೆಹರಿಸಲು ಪಣ ತೊಟ್ಟಿದ್ದಾರೆ. ಜನರ ಪರವಾಗಿ ಕೆಲಸ ಮಾಡುವ ಉಮಾಪ್ರಶಾಂತ್ ಗೆ ಮನದಾಳದ ಶುಭ ಹಾರೈಸುತ್ತೇನೆ ಎಂದು ನಿವೃತ್ತ ಎಸ್ಪಿ ಜಗದೀಶ್ ಹೇಳುತ್ತಾರೆ.