
ಭದ್ರಾವತಿ : ಭದ್ರಾವತಿಯಲ್ಲಿ ಮೂರು ದಿನಗಳ ಅಂತರದಲ್ಲಿ ಮತ್ತೋರ್ವ ರೌಡಿಶೀಟರ್ ಕಾಲಿಗೆ ಗುಂಡೇಟು ಬಿದ್ದಿದೆ.
ರೌಡಿಶೀಟರ್ ಗಳ ಹುಟ್ಟಡಗಿಸಲು ಎಸ್ಪಿ ಮಿಥುನ್ ಕುಮಾರ್ ದಿಟ್ಟ ನಿರ್ಧಾರ ಕೈಗೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಶುಕ್ರವಾರ ರೌಡಿ ಶೀಟರ್ ಗುಂಡ ಯಾನೆ ರವಿ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಮೂರು ದಿನದಲ್ಲಿ ಭದ್ರಾವತಿಯಲ್ಲಿ ಮತ್ತೊಬ್ಬ ರೌಡಿ ಶೀಟರ್ ಶಾಹೀದ್ ಕಾಲಿಗೆ ಕಾಗದ ನಗರ ಪಿಐ ನಾಗಮ್ಮ ರಿಂದ ಗುಂಡು ಹಾರಿಸಲಾಗಿದೆ.
ಶಾಹೀದ್ ರೌಡಿ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ, ಈತನ ವಿರುದ್ಧ 12 ಪ್ರಕರಣಗಳಿದ್ದವು. ಪೋಲೀಸರ ಮೇಲಿನ ಹಲ್ಲೆ ಸೇರಿದಂತೆ 12 ಪ್ರಕರಣಗಳಿಗೆ ಬೇಕಿದ್ದ ಶಹೀದ್ ನ್ಯಾಯಾಲಯದ ಕಲಾಪಗಳಿಂದ ತಪ್ಪಿಸಿಕೊಂಡಿದ್ದ.


ಇಂದು ಭದ್ರಾವತಿ ಪಿಐ ನಾಗಮ್ಮ, ಪಿಸಿ ನಾಗರಾಜ್ ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಶಾಹೀದ್ ಪಿಸಿ ನಾಗರಾಜ್ ಮೇಲೆ ದಾಳಿ ನಡೆಸಿದ್ದ. ನಾಗಮ್ಮನವರ ಎಚ್ಚರಿಕೆಯ ನಡುವೆಯೂ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದು, ಈ ವೇಳೆ ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಲಾಗಿದೆ.
ಶಾಹಿದ್ 2024 ರಲ್ಲಿ ಶಿವಮೊಗ್ಗದಲ್ಲಿ ನಡೆದ ಡಬ್ಬಲ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ. ಯಾಸಿನ್ ಖುರೇಷಿಯ ಆಪ್ತ ಹಾಗೂ ಆದಿಲ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ. ಈತ ಬೇಲ್ ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ
ಭದ್ರಾವತಿಯಲ್ಲಿ ಶಹೀದ್ ಯಾಸಿನ್ ಖುರೇಶಿಯ ಎದುರಾಳಿಯ ಮಾಹಿತಿಯನ್ನು ಪಡೆದು ದಾಳಿಗೆ ಸಂಚು ರೂಪಿಸಿದ್ದ ಎಂಬ ಮಾಹಿತಿ ಇದೆ. ಈ ವೇಳೆ ಇಬ್ಬರು ಪತ್ತೆಯಾಗಿದ್ದು ಉಳಿದವರು ತಲೆಮರೆಸಿಕೊಂಡಿದ್ದರು.