Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಪ್ರಮುಖ ಸುದ್ದಿ»ಜಿಎಂ ವಿಶ್ವವಿದ್ಯಾಲಯ ಓಪನ್ ಡೇ ಕಾರ್ಯಕ್ರಮ ಇದೇ ಡಿಸೇಂಬರ್ 13ಮತ್ತು14ಕ್ಕೆ ಎರಡು ದಿನ.
ಪ್ರಮುಖ ಸುದ್ದಿ

ಜಿಎಂ ವಿಶ್ವವಿದ್ಯಾಲಯ ಓಪನ್ ಡೇ ಕಾರ್ಯಕ್ರಮ ಇದೇ ಡಿಸೇಂಬರ್ 13ಮತ್ತು14ಕ್ಕೆ ಎರಡು ದಿನ.

davangerevijaya.comBy davangerevijaya.com11 December 2024No Comments2 Mins Read
Facebook WhatsApp Twitter
Share
WhatsApp Facebook Twitter Telegram

ವರ್ಷದ ಹರುಷದಲ್ಲಿರುವ ಜಿಎಂ ವಿಶ್ವವಿದ್ಯಾಲಯದಲ್ಲಿ ಡಿಸೇಂಬರ್ 13ರಿಂದ “ಓಪನ್ ಡೇ” ಸಂಭ್ರಮ,  ಎರಡು ದಿನಗಳು ವಿವಿಧ ಕೋರ್ಸ್ ಗಳ ಮಾಹಿತಿ ಮುಕ್ತತೆಯ ಕ್ಯಾಂಪಸ್ ಟೂರ್,  ವಿದ್ಯಾರ್ಥಿಗಳ ಮನರಂಜಿಸಲಿರುವ ರಾಪರ್ ಸಿಂಗರ್ ರಾಹುಲ್ ಡಿಟ್-ಓ

ದಾವಣಗೆರೆ :

ವರುಷದ ಸಂಭ್ರಮದಲ್ಲಿರುವ ನಗರದ ಜಿಎಂ ವಿಶ್ವವಿದ್ಯಾಲಯದ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಲಭ್ಯತೆ ಮತ್ತು ಪ್ರಗತಿಯ ಹೆಜ್ಜೆ ಗುರುತಿನ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ನೇರವಾಗಿ ತಿಳಿಯಬಹುದಾದ ಮುಕ್ತತೆಯ ದಿನವೇ ಆದ “ಓಪನ್ ಡೇ” ಕಾರ್ಯಕ್ರಮವನ್ನು ಇದೇ ಡಿಸೇಂಬರ್ 13 ಮತ್ತು 14 ಈ ಎರಡು ದಿನಗಳು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ನಗರದ ವರದಿಗಾರರ ಕೂಟದಲ್ಲಿ ಡಿಸೇಂಬರ್ 11ರ ಬುಧವಾರ ಸುದ್ದಿಗೋಷ್ಠಿಯಲ್ಲಿ ಜಿಎಂ ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ನಿರ್ದೇಶಕರು, ಓಪನ್ ಡೇ ಕಾರ್ಯಕ್ರಮದ ಸಂಚಾಲಕರಾದ ಡಾ. ಟಿ.ಎಂ. ವೀರ ಗಂಗಾಧರ ಸ್ವಾಮಿ, ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರು, ಓಪನ್ ಡೇ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ತೇಜಸ್ವಿ ಕಟ್ಟಿಮನಿ ಟಿ.ಆರ್. ಮಾಹಿತಿ ನೀಡುತ್ತಾ, ಈ ಕಾರ್ಯಕ್ರಮವನ್ನು ಎರಡನೇ ಬಾರಿ ನಡೆಸಲಾಗುತ್ತಿದ್ದು, ಎರಡು ದಿನಗಳೂ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೂ ನಡೆಯಲಿದ್ದು, ಜಿಎಂ ವಿಶ್ವವಿದ್ಯಾಲಯವಾಗಿ ವರುಷಗಳಾಗಿದ್ದು, ಇಲ್ಲಿ ವಿವಿಧ ವಿಭಾಗಗಳಲ್ಲಿ ಕೋರ್ಸ್ ಗಳ ಪ್ರಾರಂಭಿಸಲಾಗಿದೆ.

42 ಯುಜಿ, 18 ಪಿಜಿ ಕೋರ್ಸ್ ಗಳಿದ್ದು, ಈ ಎಲ್ಲ ಕೋರ್ಸ್ ಗಳ ಬಗ್ಗೆ ಆಯಾ ವಿಭಾಗಗಳ ಡೀನ್ ಗಳು, ಹೆಚ್ಒಡಿ, ಪ್ರೊಫೆಸರ್ ಗಳು, ನಿರ್ದೇಶಕರು ಮಾಹಿತಿ ನೀಡುವರು. ಅಲ್ಲದೇ ಇಲ್ಲಿನ ಶೈಕ್ಷಣಿಕ ಕಾರ್ಯಕ್ರಮಗಳ ಲಭ್ಯತೆ ಬಗ್ಗೆ ಮಾಹಿತಿ ತಿಳಿಯುವ ಕ್ಯಾಂಪಸ್ ಟೂರ್ ಹಮ್ಮಿಕೊಳ್ಳಲಾಗಿದ್ದು, ಈ ಓಪನ್ ಡೇಗೆ ಜಿಲ್ಲೆಯ ವಿವಿಧೆಡೆಗಳಿಂದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸುವರು. ಸುಮಾರು 30 ವಿವಿಧ ಕಾಲೇಜುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇವರೆಲ್ಲಾ ಭಾಗವಹಿಸಲು ಜಿಎಂ ವಿಶ್ವವಿದ್ಯಾಲಯದಿಂದ ವಾಹನ ವ್ಯವಸ್ಥೆ ಸಹ ಮಾಡಲಾಗಿದೆ.

ಎಸ್ ಎಸ್ ಎಲ್ ಸಿ, ಐಟಿಐ, ಪಿಯುಸಿ, ಡಿಪ್ಲೋಮೋ ಮತ್ತು ಯಾವುದೇ ಪದವಿಯಾದ ವಿದ್ಯಾರ್ಥಿಗಳಿಗೆ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಅನುಭವಿ ಉಪನ್ಯಾಸಕರುಗಳಿಂದ ಮಾಹಿತಿ ಕೂಡ ದೊರಕುತ್ತದೆ. ವೃತ್ತಿಪರ ಶಿಕ್ಷಣದ ಕೋರ್ಸ್ ಗಳ ಅನುಕೂಲಗಳು ಹಾಗೂ ಪ್ಲೇಸ್ಮೆಂಟ್ ಬಗ್ಗೆ ತಿಳಿಸಲಾಗುವುದು.

ಇದೇ ಸಂದರ್ಭದಲ್ಲಿ ಪ್ರೇರಕ ಭಾಷಣಕಾರರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸುತ್ತಾರೆ. ಜಿಎಂ ವಿಶ್ವವಿದ್ಯಾಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಅವರು ಮಾಡಿರುವ ಪ್ರಾಜೆಕ್ಟ್ ಎಕ್ಸಿಬಿಷನ್ ಕೂಡ ಇರುತ್ತದೆ.

ಡಿಸೇಂಬರ್ 13ರ ಬೆಳಗ್ಗೆ 9.30 ಗಂಟೆಗೆ ಈ ಓಪನ್ ಡೇ ಉದ್ಘಾಟನೆ ನಡೆಯಲಿದೆ. ಓಪನ್ ಡೇಯಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು, ಜಿಎಂ ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ನೋಂದಣಿ ಕಾರ್ಯ ನಡೆಯಲಿದೆ.
ಈ ಎರಡೂ ದಿನವೂ ಮನರಂಜನೆ ಕಾರ್ಯಕ್ರಮ ನಡೆಯಲಿದ್ದು, ಎರಡನೇ ದಿನ ಸಂಜೆ ವಿಶೇಷವಾಗಿ ರಾಪರ್ ಸಿಂಗರ್ ರಾಹುಲ್ ಡಿಟ್-ಓ ಅವರಿಂದ ರಾಪರ್ ಗೀತೆಗಳ ಮನರಂಜನೆ ನಡೆಯಲಿದೆ.

ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್. ಬಸವರಾಜು ಮಾತನಾಡಿ, ಕೆಸಿಇಟಿಯಲ್ಲಿ ಉನ್ನತ 2 ಸಾವಿರದೊಳಗೆ ಶ್ರೇಣಿಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಶೇ.100ರಷ್ಟು ಬೋದನಾ ಶುಲ್ಕ ವಿನಾಯಿತಿ, ರಾಜ್ಯ ಅಥವಾ ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶೇ, 75ರಷ್ಟು ಬೋದನಾ ಶುಲ್ಕ ಮನ್ನಾ, ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಲಭ್ಯ. ಇವು ಜಿಎಂಯು ಕೊಡುಗೆಗಳಾಗಿವೆ ಎಂದರು.

ಓಪನ್ ಡೇ ಯಂದು ವಿದ್ಯಾರ್ಥಿಗಳು ಪ್ರವೇಶವನ್ನು ಆರಿಸಿಕೊಳ್ಳಲಿದ್ದು, ಅವರ ಪಿಯುಸಿ ಕಾರ್ಯಕ್ಷಮತೆ ಆಧಾರದ ಮೇಲೆ ಶುಲ್ಕ ರಿಯಾಯಿತಿಗಳನ್ನು ಪಡೆಯಬಹುದು. ಇವು ಓಪನ್ ಡೇ ಕೊಡುಗೆಗಳಾಗಿವೆ. ವೃತ್ತಿ ಅವಕಾಶಗಳನ್ನು ಕಲಿಯಲು ಉತ್ತಮ ಅವಕಾಶ, ಪ್ರೇರಕ ಭಾಷಣ ಮತ್ತು ಕ್ಯಾಂಪಸ್ ಪ್ರವಾಸ, ಓಪನ್ ಡೇ ದಿನದಂದು ನಿಮ್ಮ ಆಸನವನ್ನು ಕಾಯ್ದಿರಿಸಿ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳುವುದು ಓಪನ್ ಡೇ ಇವೆಂಟ್ನ ಪ್ರಮುಖ ಅಂಶಗಳಾಗಿವೆ ಎಂದರು.

ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.

ಗೋಷ್ಠಿಯಲ್ಲಿ ಜಿಎಂಯು ಸಹಾಯಕ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ. ಎಸ್. ವಸಂತ್ ಕುಮಾರ್ ಇದ್ದರು

feachare Top News
Share. WhatsApp Facebook Twitter Telegram
davangerevijaya.com
  • Website

Related Posts

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ

3 July 2025

ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ

29 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,333 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,595 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

By davangerevijaya.com8 July 20250

ನಂದೀಶ್ ಭದ್ರಾವತಿ, ದಾವಣಗೆರೆ ಅತ್ತ ಶಿರಡಿಯಲ್ಲಿ ಗುರುಪೂರ್ಣಿಮಾ ಹಬ್ಬವು ಭಕ್ತಿ ಭಾವದಿಂದ ಆರಂಭವಾಗಲಿದ್ದು, ಸಾವಿರಾರು ಭಕ್ತರು ಸಾಯಿನಾಮವನ್ನು ಪಠಿಸುತ್ತ ಶಿರಡಿಯನ್ನು…

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025

ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ

3 July 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ

8 July 2025

ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?

7 July 2025

ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..

5 July 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,656 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,333 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,084 Views

Subscribe to Updates

Get the latest creative news from SmartMag about art & design.

Recent Posts
  • ದಾವಣಗೆರೆ : ಜಯನಗರದ ಸಾಯಿಬಾಬಾ ಮಂದಿರದಲ್ಲಿ ಅದ್ದೂರಿ ಗುರು ಪೂರ್ಣಿಮೆ . ಸಾಯಿ ದರ್ಶನಕ್ಕೆ ಬರಲಿದ್ದಾರೆ ಸಹಸ್ರಾರು ಜನ
  • ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಲಾಡ್ಜ್ ನಲ್ಲಿ ನೇಣಿಗೆ ಶರಣು, ಅಷ್ಟಕ್ಕೂ ಪಿಎಸ್ಐ ಲೈಫ್ ಹಿಂದೆ ಏನಿತ್ತು?..ನೇಣಿಗೆ ಶರಣಾಗುವ ಮೊದಲು ಆಧಾರ್ ನಂಬರ್ ಅಳಿಸಿದ್ದು ಯಾಕೆ?
  • ಭದ್ರಾ ಡ್ಯಾಂ ಭರ್ತಿಯಾಗಲು ಇನ್ನೇಷ್ಟು ಅಡಿ ಬಾಕಿ ಇರಬಹುದು?…ಈ ತಿಂಗಳಿನಲ್ಲಿಯೇ ನೋಡುಗರಿಗೆ ಸಿಗಲಿದೆ ಜಲಾಶಯದ ಸೊಬಗು .‌‌‌..
  • ಇಡಿ ಬಲೆಯಿಂದ ಹೊರಬಂದ ಮಂಜುನಾಥ್ ಗೌಡ…ಎಂಭತ್ತೇರಡು ದಿನಗಳ ನಂತರ ಮರಳಿದ ಸಹಕಾರಿ ಧುರೀಣ
  • ಕಾಗದನಗರ ಶಾಲೆ ರೀ ಓಪನ್ ; ಫಲಿಸಿತು ಹೋರಾಟಗಾರ ಮಧುಸೂಧನ್ ಶ್ರಮ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.