Close Menu
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog

Subscribe to Updates

Get the latest creative news from FooBar about art, design and business.

What's Hot

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Facebook X (Twitter) Instagram
Facebook X (Twitter) Instagram
Davangere VijayaDavangere Vijaya
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
Davangere VijayaDavangere Vijaya
Home»ಕ್ರೈಂ ಸುದ್ದಿ»ಪ್ರೀತಿ ನಂಬಿ ಪ್ರಿಯಕರನ್ನು ಕೈ ಹಿಡಿದು ಬಂದವಳು ಕೊನೆಗೆ ಮಸಣ ಸೇರಿದಳು : ಕೊಪ್ಪದ ಹುಡುಗಿ ಸಾಗರದಲ್ಲಿ ಮರ್ಡರ್, ಈ ಕಥೆ ಹಿಂದೆ ಇದೆ ರೋಚಕ ಕಹಾನಿ
ಕ್ರೈಂ ಸುದ್ದಿ

ಪ್ರೀತಿ ನಂಬಿ ಪ್ರಿಯಕರನ್ನು ಕೈ ಹಿಡಿದು ಬಂದವಳು ಕೊನೆಗೆ ಮಸಣ ಸೇರಿದಳು : ಕೊಪ್ಪದ ಹುಡುಗಿ ಸಾಗರದಲ್ಲಿ ಮರ್ಡರ್, ಈ ಕಥೆ ಹಿಂದೆ ಇದೆ ರೋಚಕ ಕಹಾನಿ

ಸಾಲ ಕೊಟ್ಟು ಪ್ರೀತಿ ಮಾಡಿದ ಕೈ ಗಳಿಂದಲೇ ಕೊಲೆ ಮಾಡಿದ
davangerevijaya.comBy davangerevijaya.com25 July 2024Updated:25 July 2024No Comments3 Mins Read
Facebook WhatsApp Twitter
Share
WhatsApp Facebook Twitter Telegram

ನಂದೀಶ್ ಭದ್ರಾವತಿ, ಶಿವಮೊಗ್ಗ

ಅದೊಂದು ಹೃದಯ ವಿದ್ರಾವಿಕ ಘಟನೆ.. ಆಕೆ ಪ್ರೀತಿಸಿದವನ ಮೇಲೆ ಬೆಟ್ಟದಷ್ಟು ನಂಬಿಕೆ ಇಟ್ಕೊಂಡು ಅವನನ್ನ ಮದುವೆಯಾಗಲು ನಿರ್ಧರಿಸಿದ್ಲು. ಆದ್ರೆ ಮದುವೆ ,ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿತ್ತು. ಕೊನೆಗೆ ಅದು ಕೊಲೆಯಾಗುವ ಹಂತಕ್ಕೆ ತಲುಪಿದ್ದು ನಿಜಕ್ಕೂ ದುರಂತ. ಬಾಳಿ ಬದುಕಬೇಕಿದ್ದ ಯುವತಿ ಪ್ರೀತಿಯ ಬಲೆಯಿಲ್ಲಿ ಬಿದ್ದು ಶವವಾಗಿದ್ದಾಳೆ. ಅಷ್ಟಕ್ಕೂ ಆ ಕೊಲೆ ನಡೆದ ರೀತಿಯ ರೋಚಕ…

K
ಕೊಲೆಯಾದ ಸೌಮ್ಯ

ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಅಂತ ಗೋಳಾಡುವವರ ಮಧ್ಯೆ ಇಲ್ಲೊಬ್ಬ ಯುವಕ ಮನಸ್ಸಾರೆ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ಕೊಲೆ ಮಾಡಿ ಶವ ಹೂತಿಕ್ಕಿರುವ ಹೃದಯವಿದ್ರಾವಕ ಘಟನೆ ನಡೆದಿದೆ..ಹೌದು  ಸಾಗರ ಮೂಲದ ಸೃಜನ್ (21) ಕೊಲೆ ಮಾಡಿದ ಯುವಕನಾದರೆ, ಕೊಪ್ಪ ಮೂಲದ ಸೌಮ್ಯ ಕೊಲೆಯಾದ ಯುವತಿ.

ತೀರ್ಥಹಳ್ಳಿಯ ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಸಾಗರ ಮೂಲದ ಸೃಜನ್ 2021 ರಲ್ಲಿ ಕೆಲಸ ಮಾಡುತ್ತಿದ್ದ. ಹಾಗೆ ಸಾಲವನ್ನು ಸಂಗ್ರಹ ಮಾಡಲು ಸೃಜನ್ ಎಲ್ಲ ಊರಿಗೆ ಹೋಗುತ್ತಿದ್ದ‌ ಅಂತೆಯೇ ಇದೇ ಫೈನಾನ್ಸ್ ಬ್ರಾಂಚ್ ಆಫೀಸ್ ವೊಂದು ಕೊಪ್ಪದಲ್ಲಿತ್ತು.  ಅಲ್ಲಿಯೂ ಸಹ ಸೃಜನ್ ಸಾಲ ವಸೂಲಿ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಕೊಪ್ಪದ ಸೌಮ್ಯಳಿಗೂ ಸೃಜನ್ ಸಾಲ ಕೊಟ್ಟಿದ್ದು, ಅವಳ ಮನೆಗೆ ಸಾಲ ವಸೂಲಿಗೆ ಹೋಗುತ್ತಿದ್ದ‌. ಹೀಗಿರುವಾಗ ಸೃಜನ್ ಗೆ ಸೌಮ್ಯಳ ಪರಿಚಯವಾಗಿದ್ದು, ಇವರಿಬ್ಬರು ತಮ್ಮ ಅಂತಃಕರಣದ ಪ್ರೀತಿ ಹಂಚಿಕೊಂಡಿದ್ದಾರೆ. ನಂತರ ಚಾಟಿಂಗ್ ಶುರುವಾಗಿದೆ.  ಇವರಿಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಸಲುಗೆಗೆ ತಿರುಗಿ ಪ್ರೀತಿಯಾಗಿ ಬದಲಾಗಿದೆ.

ಸೃಜನ್ ಹಾಗೂ ಸೌಮ್ಯಾ ಇಬ್ಬರೂ ಪ್ರೀತಿಯ ಅಮಲಿನಲ್ಲಿದ್ದು, ಇವರಿಬ್ಬರು ಪ್ರಣಯ ಪಕ್ಷಿಗಳಾಗಿ ತಿರುಗಾಡುತ್ತಿದ್ದರು. ಈ ಪ್ರೀತಿಯ ವಿಚಾರ ಸೌಮ್ಯ ತಾಯಿಗೆ ಗೊತ್ತಾಗಿತ್ತು. ಅಲ್ಲದೇ ಮದುವೆಗೆ ಅಸ್ತು ಅಂದಿದ್ದರು.  ಆದರೆ, ಕೆಳ ಸಮುದಾಯದ ಸೌಮ್ಯಾಳನ್ನು ಮೇಲ್ವರ್ಗದ ಸೃಜನ್ ಮದುವೆ ಆಗುವುದಕ್ಕೆ ಒಪ್ಪಿರಲಿಲ್ಲ. ಈಗಲೇ ಮದುವೆ ಬೇಡ, ಮನೆಯ ಜವಾಬ್ದಾರಿ ನನಗಿದ್ದು, ಆ ಜವಾಬ್ದಾರಿ ಮುಗಿಸಿದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮದುವೆಯನ್ನು ಮುಂದೂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೇ ಅಂದ ಪ್ರಿಯಕರ 

ಜು.2ರಂದು ಮನೆಯಿಂದ ಸೃಜನ್ ಜೊತೆಗೆ ಹೋಗಿದ್ದ ಸೌಮ್ಯಾ ರಾತ್ರಿಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸೌಮ್ಯಾಳ ಪ್ರೀತಿ ವಿಷಯ ಗೊತ್ತಿದ್ದ ಆಕೆಯ ತಾಯಿ, ಮಗಳ ಮೊಬೈಲ್‌ಗೆ ಫೋನ್ ಮಾಡಿದ್ದರು. ಆದರೆ, ಆಕೆಯ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಬಳಿಕ ಸೃಜನ್‌ಗೆ ಫೋನ್ ಮಾಡಿದಾಗ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೆ ಎಂದು ಸುಳ್ಳು ಹೇಳಿದ್ದನು. ಆತಂಕದಿಂದ ಪಾಲಕರು ಜು.3ರಂದು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಸೃಜನ್ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆಗ ಒಂದೊಂದಾಗಿ ಆರೋಪಿ ಸೃಜನ್ ಉತ್ತರ ನೀಡಿದ್ದಾನೆ.

ಜು.2 ರಂದು ನನಗೆ ಆರೋಗ್ಯ ತರಬೇತಿಗೆ ಹೋಗುವುದಿದೆ ಎಂದು ಮನೆಯಿಂದ ಸೌಮ್ಯ ತನ್ನ ಪ್ರಿಯತಮ ಸೃಜನ್‌ನನ್ನು ನೋಡಲು ಸಾಗರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ನಂತರ ನೀನು ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಯುವತಿ ಸೌಮ್ಯಾ ಒತ್ತಾಯಿಸಿದ್ದಾಳೆ. ಇದರಿಂದ ಕುಪಿತಗೊಂಡ ಸೃಜನ್, ಸೌಮ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ಜಲ ಜೀವನ್ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಶವ

ಸೌಮ್ಯಳ ಕತ್ತು ಹಿಸುಕಿ ಕೊಲೆ ಮಾಡಿ  ಮೃತದೇಹವನ್ನು ಸೃಜನ್ ಮುಚ್ಚಿಟ್ಟಿದ್ದನು. ಬಳಿಕ ತಾಳಗುಪ್ಪಕ್ಕೆ ತೆರಳಿ ತನ್ನ ಕಾರು ತೆಗೆದುಕೊಂಡು ಬಂದು ಮೃತದೇಹವನ್ನು ಸಾಗಿಸಿದ್ದನು. ನಂತರ ಮೃತದೇಹ ಸಾಗಿಸಿ ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿಯ ಮುಂಬಾಳು ಕ್ರಾಸ್‌ ಬಳಿ ಜಲಜೀವನ್ ಮಿಷನ್ ಕಾಮಗಾರಿಗಾಗಿ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಯಲ್ಲಿಯೇ ಸೌಮ್ಯಳ ಮೃತದೇಹವನ್ನು ಹೂತು ಹೋಗಿದ್ದಾನೆ. ಯುವತಿ ಸೌಮ್ಯ ನಾಪತ್ತೆ ಪ್ರಕರಣದ ತನಿಖೆ ಕೈಗೊಂಡ ಕೊಪ್ಪ ಠಾಣೆ ಪೊಲೀಸರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ. ಜು.3ರಿಂದ 19ರವರೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಸೌಮ್ಯಾಳ ಸುಳಿವು ಸಿಕ್ಕಿರಲಿಲ್ಲ. ಕೊಪ್ಪ ಠಾಣೆ ಪೊಲೀಸರು ಸೌಮ್ಯಾಳ ಮೊಬೈಲ್ ಸಿಡಿಆರ್ (ಕಾಲ್ ರೇಕಾರ್ಡರ್) ಪರಿಶೀಲಿಸಿದಾಗ ಸೃಜನ್‌ಗೆ ಹಲವು ಬಾರಿ ಕರೆ ಮಾಡಿದ್ದು ತಿಳಿದಿತ್ತು. ಇದನ್ನು ಅರಿತ ಪೊಲೀಸರು ಸೃಜನ್‌ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ವಿಚಾರಣೆಗೆ ಬಂದಿದ್ದ ಸೃಜನ್ ಪೊಲೀಸರ ಬಳಿ ಲಾಕ್ ಆಗಿದ್ದಾನೆ. ಕೊಲೆಯ ಸಂಪೂರ್ಣ ಮಾಹಿತಿ ಬಾಯಿ ಬಿಟ್ಟಿದ್ದಾನೆ. ಒಟ್ಟಾರೆ ಬಾಳಿ ಇನ್ನೊಂದು ಮನೆಗೆ ಬೆಳಕಾಗಬೇಕಿದ್ದ ಸೌಮ್ಯಳ ಕಥೆ ಮುಗಿಸಿದ ಸೃಜನ್ ಈಗ ಕಂಬಿ ಎಣಿಸಬೇಕಾಗಿದೆ.

behind this story is an exciting story. Believing in love Featured she who came holding her lover's hand finally joins the crowd: Koppada girl is murdered in the ocean topnews
Share. WhatsApp Facebook Twitter Telegram
davangerevijaya.com
  • Website

Related Posts

ಕಾಲ್ತುಳಿತಕ್ಕೆ 11 ಜನ ಸಾವು, ಕಮಿಷನರ್ ದಯಾನಂದ ಅಮಾನತು : ಸಿಎಂ ಸಿದ್ದರಾಮಯ್ಯ ನಡೆಗೆ ನಿವೃತ್ತ ಪೊಲೀಸ್ ಕೃಷ್ಣಪ್ಪ ಆಕ್ರೋಶ

7 June 2025

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಂಜುನಾಥ್ ಗೌಡ ಪತ್ನಿಗೆ ಬಿಗ್ ಶಾಕ್ ನೀಡಿದ ಇಡಿ !

6 June 2025

ಶಿವಮೊಗ್ಗ : ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆಯಿತು ಈ ಘೋರ ದುರಂತ

4 June 2025
Leave A Reply Cancel Reply

Top Posts

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

ಪೊಲೀಸ್ ಠಾಣೆಗೆ ಕರೆತಂದಿದ್ದ ಆರೋಪಿ ಸಾವು, ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಬದುಕಿದ್ದೇ ಹೆಚ್ಚು…ಅಷ್ಟಕ್ಕೂ ಘಟನೆ ನಡೆದಿದ್ದೇನೂ?

25 May 20243,586 Views
Stay In Touch
  • Facebook
  • Twitter
  • Pinterest
  • Instagram
  • YouTube
  • Vimeo
Don't Miss
ಪ್ರಮುಖ ಸುದ್ದಿ

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

By davangerevijaya.com12 June 20250

*ದಾವಣಗೆರೆಯಲ್ಲಿ ಅಂಚೆ  ವಿಭಾಗೀಯ  ಕಚೇರಿ ಬರಲು ಇವರು ಕಾರಣ * ದಾವಣಗೆರೆ ಅಂಚೆ ಇಲಾಖೆ ಪ್ರಥಮ ಅಧೀಕ್ಷಕ *ನಿಷ್ಠೆ, ಪ್ರಾಮಾಣಿಕತೆಯಿಂದ…

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025

ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

10 June 2025
About Us
About Us

Davanagere Vijaya Kannada News Portal

Facebook X (Twitter) Pinterest YouTube WhatsApp
Our Picks

ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.

12 June 2025

ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ

11 June 2025

ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?

11 June 2025
Most Popular

ಹೈಕೋರ್ಟ್ ಆದೇಶ ತಪ್ಪು ತಿಳಿಯಲಾಗಿದೆ : ಸಿಪಿಐ ಮಂಜುನಾಥ್  ಅರ್ಜುನ್ ಲಿಂಗಾರೆಡ್ಡಿ

16 February 202412,651 Views

ದಾವಣಗೆರೆ ಸಿಟಿಯಲ್ಲಿ ರೌಡಿ ಶೀಟರ್ ಕಣುಮ ಮರ್ಡರ್

5 May 20259,321 Views

ಭದ್ರಾವತಿಯಲ್ಲಿ ಮೀಟರ್ ಬಡ್ಡಿಗೆ ಬಲಿಯಾಯಿತು ಜೀವ, ಪೊಲೀಸ್ ಇಲಾಖೆಯಲ್ಲಿದ್ದ ಅಣ್ಣನಿಂದ ಧಮಕಿ

2 April 20247,083 Views

Subscribe to Updates

Get the latest creative news from SmartMag about art & design.

Recent Posts
  • ಅಂಚೆ ಇಲಾಖೆಯ ನಿವೃತ್ತ ಅಂಚೆ ಅಧೀಕ್ಷಕ ವಿರೂಪಾಕ್ಷಪ್ಪರಿಗೆ ಸಿಕ್ಕಿತ್ತು ರಾಷ್ಟ್ರೀಯ ಮಟ್ಟದ ಅನುಭವ ಪ್ರಶಸ್ತಿ.
  • ದಾವಣಗೆರೆ ಬಿಜೆಪಿಗೆ ನೂತನ ಸಾರಥಿ..ಕುತುಹೂಲ ಇದ್ದರೇ ಈ ಸುದ್ದಿ ತಪ್ಪದೇ ಓದಿ
  • ಸಚಿವ ಸಂಪುಟದಲ್ಲಿನ ಕೆಲ ಹಳೆ ಸಚಿವ ರನ್ನು ಬದಲಾವಣೆ ಮಾಡಬೇಕೆಂದ ಶಾಸಕ ಯಾರಿಗೆ ಹೇಳಿದ್ದು?
  • ನೊಂದವರ ಕಷ್ಟಕ್ಕೆ ಸ್ಪಂದಿಸಲು‌ ಅಧಿಕಾರಿಗಳಿಗೆ ಸಲಹೆ: ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
  • ಆರ್ ಸಿಬಿ ವಿಜಯೋತ್ಸವ ವೇಳೆ 11 ಜನರ ಸಾವು : ಸಿಬಿಐಗೆ ವಹಿಸಲು ಮಾಜಿ ಸಚಿವ ಒತ್ತಾಯ
Davangere Vijaya
Facebook X (Twitter) Instagram Pinterest
  • ಪ್ರಮುಖ ಸುದ್ದಿ
  • ದಾವಣಗೆರೆ ವಿಶೇಷ
  • ಕ್ರೈಂ ಸುದ್ದಿ
  • ರಾಜಕೀಯ ಸುದ್ದಿ
  • ರೈತಮಿತ್ರ
  • ಅಡಕೆ ಧಾರಣೆ
  • ಚಿನ್ನ, ಬೆಳ್ಳಿ ಧಾರಣೆ
  • Blog
© 2025 Davangere Vijaya. the website designed and maintend by kInsta infotech bangalore

Type above and press Enter to search. Press Esc to cancel.