ಬೆಂಗಳೂರು.
ಸಾಫ್ಟ್ವೇರ್ ಕಂಪನಿಯೊAಕ್ಕೆ ವ್ಯವಸ್ಥಾಪಕ ನಿರ್ದೇಶಕರ ಫೋಟೋ ಹಾಗೂ ಕಂಪನಿಯ ಲಾಂಛನ (ಲೋಗೋ) ಬಳಸಿ 56 ಲಕ್ಷ ರೂ. ವಂಚನೆ ಮಾಡಿದ್ದ ಆಂಧ್ರ ಪ್ರದೇಶದ ಆರು ಜನ ಸೈಬರ್ ವಂಚಕರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ರಾಜ್ಯದ ಗ್ರೀಷ್ಮಾ ತಂದೆ ಸುರೇಂದ್ರ ರೆಡ್ಡಿ (23), ಎನ್.ದಿನೇಶ್ ಬಿನ್ ರವಿಕುಮಾರ್ (24), ಎಂ.ಎಸ್.ಹರಾತ್(23), ಪವನ್ ಕುಮಾರ್@ ಡ್ಯಾನಿ ಶಂಕರ್ (24), ಎನ್.ಸಾಯಿಕುಮಾರ್ (23), ಯೇನುಮುಲಾ ರವಿತೇಜ್ (32) ಬಂಧಿತರು.
ಆರೋಪಿಗಳು ಚಾರ್ಟಡ್ ಅಕೌಂಟೆಡ್, ಬಿಕಾಂ ವಿದ್ಯಾಭ್ಯಾಸ ಮಾಡಿಕೊಂಡಿದ್ದಾರೆ. ಸಾಫ್ಟ್ವೇರ್ ಕಂಪನಿಯ ಲೋಗೋ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಫೋಟೋವನ್ನು ಡಿಪಿಯಲ್ಲಿ ಇರಿಸಲಾಗಿದ್ದ ವಾಟ್ಸ್ಪ್ ನಂಬರ್ನಿAದ ಡಿಸೆಂಬರ್ 6 ರಂದು ಆ ಕಂಪನಿಯ ಅಕೌಂಟೆAಟ್ಗೆ ಆರೋಪಿಗಳು ಸಂದೇಶ ಕಳಿಸಿದ್ದರು.
ಪ್ರಾಜೆಕ್ಟ್ ಅಡ್ವಾನ್ಸ್ ಸೆಕ್ಯೂರಿಟಿ ಡೆಪಾಸಿಟ್ಗಾಗಿ ತುರ್ತಾಗಿ 56 ಲಕ್ಷ ರೂ. ವರ್ಗಾವಣೆ ಮಾಡುವಂತೆ ಸೂಚಿಸಿದ್ದರು. ಆ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆರೋಪಿಗಳ ಸಂದೇಶ ನಿಜವೆಂದು ನಂಬಿದ್ದ ಅಕೌಂಟೆAಟ್, ಕಂಪನಿಯ ಖಾತೆಯಿಂದ ಆರೋಪಿಗಳು ಸೂಚಿಸಿದ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ವಿವರಿಸಿದಾಗ ತಾವು ವಂಚನೆಗೊಳಗಾಗಿರುವುದು ತಿಳಿದು ಆಗ್ನೆಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹಣ ವರ್ಗಾವಣೆಯಾದ ಹೈದರಾಬಾದ್ ಮೂಲದ ಖಾತೆ ಹೊಂದಿದ್ದ ಓರ್ವ ಆರೋಪಿಯನ್ನು ಮೊದಲು ಬಂಧಿಸಿದ್ದರು. ವಿಚಾರಣೆ ಕೈಗೊಂಡಾಗ ಆತ ನೀಡಿದ ಮಾಹಿತಿ ಆಧರಿಸಿ ಇತರೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವಂಚಿಸಿದ ಹಣವನ್ನು ವಿತ್ಡ್ರಾ ಮಾಡಿ ಬಿಟ್ ಕಾಯಿನ್ (ಕ್ರಿಪ್ಟೋ ಕರೆನ್ಸಿ) ಖರೀದಿಸಿ ಅಧಿಕ ಬೆಲೆಗೆ ಮಾರಾಟ ಮಾಡಿದ್ದರು ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳು ಕಂಪೆನಿಗೆ ವಂಚಿಸಿದ ಹಣದಿಂದ ಐಷಾರಾಮಿ ಆಡಿ ಕಾರು ಖರೀದಿಸಿದ್ದರು. ಬಂಧಿತರಿAದ ಮೊಬೈಲ್ ಫೋನ್, 58,600 ರೂ. ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 5 ಲಕ್ಷ ಹಣವನ್ನು ಸಂಬAಧಿಸಿದ ಕಂಪನಿಯ ಖಾತೆಗೆ ಹಿಂದಿರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.